Thursday, 4 October 2018

ಸ್ಮಾರ್ಟ್‌ಸಿಟಿ: ತೈವಾನ್ ತಂತ್ರಜ್ಞಾನ ಪೂರಕ

ಸ್ಮಾರ್ಟ್‌ಸಿಟಿ: ತೈವಾನ್ ತಂತ್ರಜ್ಞಾನ ಪೂರಕ

ಸ್ಮಾರ್ಟ್ ಏಷ್ಯಾ ಏಕ್ಸ್‌ಪೋ ಸಮಿಟ್-೨೦೧೮ : ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ 

ಬೆಂಗಳೂರು: ತುಮಕೂರು ಸೇರಿದಂತೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಆಯ್ಕೆಗೊಂಡಿರುವ ರಾಜ್ಯದ ೭ ನಗರಗಳು ಸೇರಿದಂತೆ ನಗರ ಪ್ರದೇಶಗಳಲ್ಲಿ ಜನರಿಗೆ ಗುಣಮಟ್ಟದ ಜೀವನಶೈಲಿಯನ್ನು ಕಲ್ಪಿಸಿಕೊಡುವುದರೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದರ ಜೊತೆಗೆ ಸ್ಥಳೀಯ ಸಂಸ್ಥೆಗಳು ಸ್ವಾವಲಂಬಿಗಳಾಗಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆದ ಸ್ಮಾರ್ಟ್ ಏಷ್ಯಾ-ಎಕ್ಸ್‌ಪೋ-೨೦೧೮ ಉದ್ಘಾಟಿಸಿ ಮಾತನಾಡಿದ ಅವರು ನಗರ ಪ್ರದೇಶದ ಜನರು ಎದುರಿಸುತ್ತಿರುವ ಸಾರಿಗೆ, ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆಯಂತಹ ಸಮಸ್ಯೆಗಳಿಗೆ ಸ್ಮಾರ್ಟ್‌ಸಿಟಿ ಪರಿಕಲ್ಪನೆ ಉತ್ತಮ ಪರಿಹಾರವಾಗಬೇಕಿದೆ ಎಂದರು.